September 16, 2026

ಕೊಹ್ಲಿ ಜೊತೆಗಿನ ನೆನಪು ಹಂಚಿಕೊಂಡ ಸ್ಟಾರ್ ವೇಗಿ

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ದಾಖಲೆ ಬರೆದ ಆಸ್ಟ್ರೇಲಿಯಾ ತಂಡದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ೨೦೨೪ರ ಐಪಿಎಲ್ ಟೂರ್ನಿಯನ್ನೇ ಎದುರು ನೋಡುತ್ತಿದ್ದಾರಂತೆ. ಈ ವಿಷಯವನ್ನು ಸಂದರ್ಶನವೊAದರಲ್ಲಿ ತಾವೇ ಖುದ್ದಾಗಿ ಹೇಳಿಕೊಂಡಿದ್ದಾರೆ. ಈ ವೇಳೆ ಆರ್‌ಸಿಬಿ ತಂಡದಲ್ಲಿದ್ದಾಗ ವಿರಾಟ್ ಕೊಹ್ಲಿ ಜೊತೆಗಿನ ನೆನಪುಗಳನ್ನ ಹಂಚಿಕೊAಡಿದ್ದಾರೆ.ಸAದರ್ಶನವೊAದರಲ್ಲಿ ಮಾತನಾಡಿರುವ ಸ್ಟಾರ್ಕ್, ನಾನು ಖಅಃ ಪ್ರವೇಶಿಸಿದಾಗ ಕೊಹ್ಲಿ ಟೀಂ ಕ್ಯಾಪ್ಟನ್ ಆಗಿದ್ದರು. ಆಗಲೇ ನಾನು ಅವರನ್ನು ಸರಿಯಾಗಿ ತಿಳಿದುಕೊಂಡೆ. ಮೈದಾನದ ಹೊರಗೆ ಮತ್ತು ಮೈದಾನದ ಆಚೆ ವಿಭಿನ್ನ ವ್ಯಕ್ತಿತ್ವ ಅವರದ್ದು. ಈಗಲೂ […]

ಪಾರ್ಕ್ ಮಾಡಿದ್ದ ಕಾರಿನಿಂದ 2.65 ಕೋಟಿ ರೂ. ನಗದು ವಶ

ರಾಯಪುರ: ಪಾರ್ಕ್ ಮಾಡಿರುವ ಕಾರಿನಲ್ಲಿದ್ದ 2.64 ಕೋಟಿ ರೂಪಾಯಿಗಳನ್ನು ವಶಕ್ಕೆ ಪಡೆದಿರುವ ಘಟನೆ ಛತ್ತೀಸ್‌ಗಢದ ದುರ್ಗ್  ಜಿಲ್ಲೆಯಲ್ಲಿ ನಡೆದಿದೆ. ಸೆಕ್ಟರ್-1 ಪ್ರದೇಶದ ಬ್ಯಾಂಕ್ ಬಳಿ ಅನುಮಾಸ್ಪದವಾಗಿ ಮೂರು ಕಾರುಗಳು ಪಾರ್ಕ್ ಮಾಡಲಾಗಿತ್ತು. ವಾಹನಗಳ ನಿಲುಗಡೆ ಬಗ್ಗೆ ಮಾಹಿತಿ ಪಡೆದ ಭಿಲಾಯಿ ಭಟ್ಟಿ ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ಅಪರಧ ನಿಗ್ರಹ ಮತ್ತು ಸೈಬರ್ ಘಟದ ಜಂಟಿ ತಂಡ ತಲುಪಿದೆ.  ಎರಡು ವಾಹನಗಳಿಲ್ಲಿದ್ದ ಮೂವರನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ. ತಪಾಸಣೆ ವೇಳೆ ಕಾರಿನಲ್ಲಿ 2.64 ಕೋಟಿ ರೂಪಾಯಿಗಳ ನಗದು […]

ಸಿಟಿ ರವಿಗೆ ಲೋಕಸಭೆ ಟಿಕೆಟ್​ ನೀಡುವಂತೆ ಪಟ್ಟು

ಚಿಕ್ಕಮಗಳೂರು: ಮಾಜಿ ಶಾಸಕ ಸಿಟಿ ರವಿ  ನಿವಾಸಕ್ಕೆ ಇಂದು ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್​. ಅಶೋಕ್ ಭೇಟಿ ನೀಡಿದ್ದಾರೆ. ಈ ವೇಳೆ ಚುನಾವಣೆ ಬಗ್ಗೆ ಚರ್ಚಿಸಲಾಗಿದೆ ಎನ್ನಲಾಗುತ್ತಿದೆ. ಬಳಿಕ ಚಿಕ್ಕಮಗಳೂರು, ಉಡುಪಿ ಎಂಪಿ ಟಿಕೆಟ್ ಸಿಟಿ ರವಿ ಅವರಿಗೆ ಕೊಡಿ ಸರ್​ ಎಂದು ಬಿ.ವೈ ವಿಜಯೇಂದ್ರರಿಗೆ ಸಿಟಿ ರವಿ ಮುಂದೆಯೇ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಒಂದು ಅವಕಾಶ ಸಿಟಿ ರವಿ ಅವರಿಗೆ ಕೂಡಿಸಿ. ನಾವು ಗೆಲ್ಲಿಸುತ್ತೇವೆ ಎಂದು ಮನವಿ ಮಾಡಿದ್ದಾರೆ. ನಾವು ನಿಮ್ಮ ಬಳಿಗೆ ನಿಯೋಗ ಕರೆದುಕೊಂಡು […]

ಸುದೀಪ್ ಚಿತ್ರರಂಗಕ್ಕೆ ಬಂದು 28 ವರ್ಷ

ಕಿಚ್ಚ ಸುದೀಪ್ ಸಿನಿಮಾ ರಂಗಕ್ಕೆ ಬಂದು 28 ವರ್ಷಗಳು ಸಂದಿವೆ. ಈ ದಿನವನ್ನು ಅವರು ವಿಶೇಷವಾಗಿ ನೆನಪಿಸಿಕೊಂಡಿದ್ದಾರೆ. ಅವರ ಮೊದಲ ಸಿನಿಮಾ ತಾಯವ್ವನನ್ನು ನೆನಪಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಚಾಲನೆ ನೀಡಿದ್ದ ಅಂಬರೀಶ್ ಸೇರಿದಂತೆ ಹಲವು ನೆನಪುಗಳನ್ನು ಕಿಚ್ಚ ನೆನೆದಿದ್ದಾರೆ.ತಾಯವ್ವ ಸಿನಿಮಾದ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟವರು ಸುದೀಪ್, ನಂತರ ಸಾಕಷ್ಟು ಚಿತ್ರಗಳನ್ನು ಮಾಡಿದವರು. ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ನಿರೂಪಕರಾಗಿ ಚಿತ್ರೋದ್ಯಮದಲ್ಲಿ ಗುರುತಿಸಿಕೊಂಡಿದ್ದಾರೆ. ಕೇವಲ ಕನ್ನಡದ ನಟರಾಗಿ ಉಳಿಯದೇ, ತೆಲುಗು, ತಮಿಳು, ಹಿಂದೆ ಚಿತ್ರಗಳಲ್ಲೂ ಸುದೀಪ್ ನಟಿಸಿದ್ದಾರೆ. ಸದ್ಯ ಅವರು […]

ಮಲೇಷಿಯಾದಲ್ಲಿ ಕಾಣಿಸಿಕೊಂಡ ರಾಕಿಂಗ್ ಸ್ಟಾರ್ ಯಶ್

ರಾಕಿಂಗ್ ಸ್ಟಾರ್ ಯಶ್ ಮಲೇಷಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಮಲೇಷಿಯಾ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನೆಚ್ಚಿನ ನಟನನ್ನು ಅಲ್ಲಿನ ಅಭಿಮಾನಿಗಳು ಸಂಭ್ರಮದಿAದ ಸ್ವಾಗತಿಸಿದ್ದಾರೆ. ಹುಟ್ಟು ಹಬ್ಬದ ದಿನದಂದು ನಡೆದ ಅಭಿಮಾನಿಗಳ ದುರಂತ ಅಂತ್ಯದ ನೋವಿನಲ್ಲಿದ್ದ ಯಶ್, ಇದೀಗ ಮತ್ತೆ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.ಹಾಗAತ ಅವರು ಮಲೇಷಿಯಾಗೆ ಹೋಗಿದ್ದು, ಶೂಟಿಂಗಾಗಿ ಅಲ್ಲ, ಖಾಸಗಿ ಸಮಾರಂಭದಲ್ಲಿ ಭಾಗಿ ಆಗುವುದಕ್ಕಾಗಿ ಯಶ್ ಮಲೇಷಿಯಾಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿನ ಕಾರ್ಯಕ್ರಮ ಮುಗಿಸಿಕೊಂಡು ಮತ್ತೆ ಅವರು ಟಾಕ್ಸಿಕ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ ಎನ್ನುವ ಮಾಹಿತಿ ಇದೆ.ಟಾಕ್ಸಿಕ್ […]

ಶಿವರಾತ್ರಿಗೆ ರಿಲೀಸ್ ಆಗಲಿದೆ ‘ಕರಟಕ ದಮನಕ’ ಸಿನಿಮಾ

ಇದೇ ಮೊದಲ ಬಾರಿಗೆ ಪ್ರಭುದೇವ್ ಮತ್ತು ಶಿವರಾಜ್ ಕುಮಾರ್ ನಟಿಸಿರುವ ಕರಟಕ ದಮನಕ ಸಿನಿಮಾ ಶಿವರಾತ್ರಿ ದಿನದಂದು ರಿಲೀಸ್ ಆಗಲಿದೆ. ಮಾರ್ಚ್ 8 ರಂದು ತಮ್ಮ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಶಿವರಾತ್ರಿಗೆ ಶಿವಣ್ಣನ ಚಿತ್ರದ ಅಬ್ಬರ ಕೇಳಿ ಬರಲಿದೆ.ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ತಯಾರಾಗಿರುವ, ಯೋಗರಾಜ್ ಭಟ್ ನಿರ್ದೇಶನದ ಈ ಸಿನಿಮಾಗೆ ವಿಚಿತ್ರವಾಗಿರುವಂಥ ಶೀರ್ಷಿಕೆ ಇಡಲಾಗಿದೆ. ಈವರೆಗೂ ಟೈಟಲ್ ವಿಷಯದಲ್ಲಿ ಉಪೇಂದ್ರ ಮಾತ್ರ ತಲೆಕೆಡಿಸುತ್ತಿದ್ದರು. ಇದೀಗ ಆ ಸಾಲಿಗೆ ಯೋಗರಾಜ್ ಭಟ್ಟರು ಕೂಡ ಸೇರ್ಪಡೆಗೊಂಡಿದ್ದಾರೆ. […]

ಕೆರಗೋಡು ಗ್ರಾಮದ ಮನೆ ಮನೆಗಳ ಮೇಲೆ ಹನುಮ ಧ್ವಜ

ಮಂಡ್ಯ:ಕೆರಗೋಡು ಹನುಮಧ್ವಜ ವಿವಾದದ ಈಗ ಅಭಿಯಾನದ ಸ್ವರೂಪ ಪಡೆದುಕೊಂಡಿದೆ. ಕೆರಗೋಡು ಗ್ರಾಮಸ್ಥರು ಹನುಮ ಧ್ವಜ ಅಭಿಯಾನಕ್ಕೆ ಮುಂದಾಗಿದ್ದಾರೆ. ಗ್ರಾಮದ ಹೃದಯ ಭಾಗದಲ್ಲಿ ಹನುಮ ಧ್ವಜ ಹಾರಿಸಲು ಸರ್ಕಾರ ಅನುಮತಿ ನೀಡಿಲ್ಲ. ಈ ಹಿನ್ನೆಲೆ ಗ್ರಾಮಸ್ಥರು ಮನೆಗಳ ಮೇಲೆ ಹನುಮಧ್ವಜ ಹಾಕಲು ಮುಂದಾಗಿದ್ದಾರೆ. ಉದ್ದೇಶ ಪೂರ್ವಕವಾಗಿ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಲಾಠಿ ಏಟಿನಿಂದಾದ ಗಾಯ ತೋರಿಸಿ ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಈ ನಡುವೆ ಇವತ್ತು ಬೆಳಗ್ಗೆ ಬಿಜೆಪಿ ನಿಯೋಗ ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮಸ್ಥರಿಂದ ಘಟನೆಯ ಬಗ್ಗೆ […]

ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಸುಗ್ರೀವಾಜ್ಞೆಯನ್ನು ತಿರಸ್ಕರಿಸಿಲ್ಲ

ಬೆಂಗಳೂರು:ಅಂಗಡಿ-ಮುAಗಟ್ಟುಗಳ ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಕಡ್ಡಾಯ ಸುಗ್ರೀವಾಜ್ಞೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿರಸ್ಕರಿಸಿಲ್ಲ. ಈ ಬಗ್ಗೆ ರಾಜಭವನ ಸ್ಪಷ್ಟೀಕರಣ ನೀಡಿದೆ. ಅಧಿವೇಶನ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಕನ್ನಡ ಕಡ್ಡಾಯ ಸುಗ್ರೀವಾಜ್ಞೆಯನ್ನು ತಿರಸ್ಕರಿಸಿಲ್ಲ, ಸರ್ಕಾರಕ್ಕೆ ವಾಪಸ್ ಕಳಿಸಲಾಗಿದೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ.ಅಧಿವೇಶನ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಕನ್ನಡ ಕಡ್ಡಾಯ ಸುಗ್ರೀವಾಜ್ಞೆಯನ್ನು ತಿರಸ್ಕರಿಸಿಲ್ಲ, ಸರ್ಕಾರಕ್ಕೆ ವಾಪಸ್ ಕಳಿಸಲಾಗಿದೆ. ಫೆಬ್ರವರಿ 12 ರಿಂದ […]

೨೪ ಕೋಟಿ ವೆಚ್ಚದಲ್ಲಿ ರವೀಂದ್ರ ಕಲಾಕ್ಷೇತ್ರಕ್ಕೆ ಕಾಯಕಲ್ಪ

ಬೆಂಗಳೂರು:ಫಾಸ್ಟ್ ಲೈಫ್‌ಗೆ ಹೊಂದಿಕೊAಡು ಮಾಯಾವಾಗುತ್ತಿರುವ ರಂಗಕಲೆಗಳು ಇಂದಿಗೂ ಜೀವಂತವಾಗಿವೆ ಎಂದ್ರೆ ಅದಕ್ಕೆ ಪ್ರಮುಖ ಕಾರಣ ಇಂದಿನ ಕೆಲ ಯುವಕರಲ್ಲಿ ಇರುವ ರಂಗ ಕಲಾಪ್ರೇಮ. ಈ ಕಲೆಗಳು, ಪೌರಾಣಿಕ ನಾಟಕಗಳನ್ನ ಇಂದಿಗೂ ನಗರದಲ್ಲಿ ಪ್ರದರ್ಶನವಾಗುವಾಗುವ ಒಂದೇ ಜಾಗ ಎಂದ್ರೆ ಅದು ರವೀಂದ್ರ ಕಲಾಕ್ಷೇತ್ರ. ಈ ರವೀಂದ್ರ ಕಲಾಕ್ಷೇತ್ರ ವಜ್ರ ಮಹೋತ್ಸವನ್ನ ಕೂಡ ಆಚಾರಿಸಿಕೊಳ್ಳುತ್ತಿದೆ. ಈ ಘಳಿಗೆಯಲ್ಲಿ ರಂಗ ಕಲಾವಿದರಿಗೆ ಅನುಕೂಲವಾಗುವ ನಿಟ್ಟಿನಿಂದ ರವೀಂದ್ರ ಕಲಾಕ್ಷೇತ್ರಕ್ಕೆ ಹೊಸ ರೂಪ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ.ರವೀAದ್ರ ಕಲಾಕ್ಷೇತ್ರ ರಂಗಕಲಾವಿದರಿಗೆ […]

ಕಾಂಗ್ರೆಸ್ ಗ್ಯಾರಂಟಿಗೆ ಗ್ಯಾರಂಟಿಯೇ ಇಲ್ಲ

ಬೆಂಗಳೂರು:ಲೋಕಸಭೆ ಚುನಾವಣೆಯಲ್ಲಿ ಸೋತರೆ ಗ್ಯಾರಂಟಿ ಯೋಜನೆಗಳನ್ನು ರದ್ದುಪಡಿಸಲಾಗುವುದು ಎಂಬ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇನ್ನು ಇದಕ್ಕೆ ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದು, ನೇರವಾಗಿ ಜನರಿಗೆ ಬೆದರಿಕೆ ಹಾಕುತ್ತಿರುವ ಕಾಂಗ್ರೆಸ್ ಪಕ್ಷವು ಜನರ ಭಾವನೆ ಜತೆ ಚೆಲ್ಲಾಟ ಆಡುತ್ತಿದೆ ಎಂದು ಕಿಡಿಕಾರಿದ್ದಾರೆ.ಈ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ, ಕಾಂಗ್ರೆಸ್ ಶಾಸಕ ಬಾಲಕೃಷ್ಣ ಹೇಳುವುದನ್ನು ನೋಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳಿಗೆ ಗ್ಯಾರಂಟಿಯೇ […]