July 29, 2026
#ಜಿಲ್ಲೆ

ಮುಸ್ಲಿಮರ ಮನೆಯಲ್ಲಿ ಅಯ್ಯಪ್ಪಸ್ವಾಮಿ ಪೂಜೆ

ಕೊಪ್ಪಳ:
ಜಿಲ್ಲೆಯ ಗಂಗಾವತಿ ಜಯನಗರದ ಪಿಂಜಾರ ಸಮುದಾಯದ ಜಿಲ್ಲಾಧ್ಯಕ್ಷ ಕಾಶಿಂಅಲಿ ಮುದ್ದಾಬಳ್ಳಿ ಅವರ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯತೆ ಸಂದೇಶ ಸಾರಿದ್ದಾರೆ.
ಪಿಂಜಾರ ಸಮುದಾಯದ ಜಿಲ್ಲಾಧ್ಯಕ್ಷ ಕಾಶಿಂಅಲಿ ಮುದ್ದಾ ಬಳ್ಳಿ ತಮ್ಮ ಸ್ವಗೃಹದಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಪೂಜೆ ನಡೆಸಲು ಎಲ್ಲ ರೀತಿಯ ಪೂಜಾ ಸಾಮಗ್ರಿಗಳ ನ್ನು ತರಿಸಿ ವ್ಯವಸ್ಥೆ ಕಲ್ಪಿಸಿ, ಸುತ್ತಮುತ್ತಲಿನ ಜನರಿಗೆ ಪೂಜೆ ಆಗಮಿಸುವಂತೆ ಮಾಹಿತಿ ನೀಡಿದ್ದರು.
ಇದರನ್ವಯ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಬೆಳಗ್ಗೆ ತಂಡದೊAದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಅಯ್ಯಪ್ಪ ಸ್ವಾಮಿ ನಾಮಸ್ಮರಣೆ ಮಾಡಿದರು. ನಂತರ ಎಲ್ಲ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಪ್ರಸಾದ ಸೇವಿಸಿದರು.
ಕಾಶಿಂಅಲಿ ಮುದ್ದಾಬಳ್ಳಿ ಅವರು ಎಲ್ಲ ಅಯ್ಯಪ್ಪಸ್ವಾಮಿ ಮಾಲಾಧಾರಿಗಳನ್ನ ಸನ್ಮಾನಿಸಿ, ಬೀಳ್ಕೊಟ್ಟರು. ಈ ವೇಳೆ ಮಲಾಧಾರಿಗಳು, ಭಕ್ತರು, ಮುಸ್ಲಿಂ ಬಾಂಧವರು ಇದ್ದರು.

Leave a comment

Your email address will not be published. Required fields are marked *