July 29, 2026
#ಬೆಂಗಳೂರು

ಬೆಸ್ಕಾಂ ಬಿಲ್ ಹೆಸರಲ್ಲಿ ಸೈಬರ್ ಹ್ಯಾಕ್ 

ಬೆಂಗಳೂರು: ವಿದ್ಯುತ್ ಬಿಲ್ ಹೆಸರಲ್ಲಿ ಜನರನ್ನು ವಂಚಿಸಿರುವ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವಿದ್ಯುತ್ ಬಿಲ್ ಬಾಕಿ ಇದ್ದರೆ ಕರೆಂಟ್ ಡಿಸ್ಕನೆಕ್ಟ್ ಮಾಡ್ತೀವಿ ಎಂದು ಹೆದರಿಸಿ ಹಣ ದೋಚುವ ಜಾಲವೊಂದು ಬೀಡುಬಿಟ್ಟಿದೆ.

https://imasdk.googleapis.com/js/core/bridge3.600.0_en.html#goog_2008460833

ಆಧುನಿಕತೆ ಬೆಳದಂತೆ ವಂಚನೆ ಜಾಲ ಹೆಚ್ಚಾಗುತ್ತಿದೆ. ಓಟಿಪಿ ಹ್ಯಾಕ್, ಆಧಾರ್ ಹ್ಯಾಕ್, ಲೋನ್ ಆಪ್ ಹ್ಯಾಕ್ ಮಾಡಿ ಹಣ ದೋಚುವ ಪ್ರಕರಣ, ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿ ಹಣ ದೋಚುವ ಪ್ರಕರಣ ಹೆಚ್ಚಾಗುತ್ತಿದೆ. ಇದರ ಮಧ್ಯೆ ಈಗ ಕೆಇಬಿ ಹೆಸರಲ್ಲಿ ಹಣ ದೋಚುವ ಜಾಲ ಬೀಡು ಬಿಟ್ಟಿದೆ. ಬೆಂಗಳೂರಿಗರು ಇಂತಹ ಪ್ರಕರಣಗಳಿಂದ ಎಚ್ಚರಿಕೆ ವಹಿಸಬೇಕಿದೆ. 

ಬೆಂಗಳೂರಿನ ಜಯನಗರ ನಿವಾಸಿ ಕೇಶವ್ ಕುಮಾರ್ ಈ ಜಾಲಕ್ಕೆ ಸಿಲುಕಿ ಪರದಾಡುತ್ತಾ ಇದ್ದಾರೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ವಿದ್ಯುತ್ ಬಿಲ್ ಕಟ್ಟಿಲ್ಲ. ಕರೆಂಟ್ ಕಟ್ ಮಾಡುತ್ತೇವೆ ಎಂದು ಮೆಸೇಜ್ ಬಂದಿದೆ. ಕರೆಂಟ್ ಕಟ್ ಆಗುತ್ತದೆ ಎನ್ನುವ ಭಯಕ್ಕೆ ಮೆಸೇಜ್‌ನಲ್ಲಿದ್ದ ನಂಬರ್‌ಗೆ ಪೇಟಿಎಂ ಮಾಡಿದ ತಕ್ಷಣ ಫೋನ್ ಹ್ಯಾಕ್ ಮಾಡಿದ್ದಾರೆ. ಪಾಸ್‌ವರ್ಡ್ ತಿಳಿದುಕೊಂಡು ಖಾತೆಯಿಂದ 15,000 ಹಣ ಎಗರಿಸಿದ್ದಾರೆ. 

ಇನ್ನೂ ಹಣ ಎಗರಿಸುತ್ತಿದ್ದಂತೆ ಎಚ್ಚೆತ್ತ ಕೇಶವ್ ಕುಮಾರ್ ಯಾರು ನೀವು? ಐಡಿ ಕಾರ್ಡ್ ಕಳುಹಿಸಿ ಎಂದು ಮೆಸೇಜ್ ಮಾಡಿದರೇ, ನಗ್ನ ಫೋಟೊ ಕಳುಹಿಸಿ ಭಯ ಪಡಿಸಿದ್ದಾರೆ. ಇವರು ಸೈಬರ್ ಖದೀಮರು ಅಂತಾ ಗೊತ್ತಾಗುತ್ತಿದ್ದಂತೆ ಕೇಶವ್ ಕುಮಾರ್ ಬ್ಯಾಂಕ್‌ಗೆ ತೆರಳಿ ಬ್ಯಾಂಕ್ ಅಕೌಂಟ್ ಅನ್ನು ಬ್ಲಾಕ್ ಮಾಡಿಸಿದ್ದಾರೆ. 

ಈ ಸಂಬಂಧ ಸೈಬರ್ ಪೊಲೀಸರಿಗೆ ದೂರು ಕೊಟ್ಟರೆ ಇದು ಕಾಮನ್ ಆಗಿದೆ, ಎಚ್ಚರಿಕೆ ವಹಿಸಿ ಎನ್ನುತ್ತಾರೆ. ಇಂತಹ ಸಮಸ್ಯೆಯನ್ನು ಬೆಂಗಳೂರಿಗರು ತುಂಬಾ ಜನ ಅನುಭವಿಸುತ್ತಾ ಇದ್ದಾರೆ. ಎಚ್ಚರಿಕೆ ಬಹುಮುಖ್ಯ ಅಂತಿದ್ದಾರೆ ಎಂದು ಕೇಶವ್ ಕುಮಾರ್ ತಿಳಿಸಿದ್ದಾರೆ. 

ಒಟ್ಟಾರೆ ವಿದ್ಯುತ್ ಬಿಲ್ ನೆಪದಲ್ಲಿ ವಂಚನೆ ಹೆಚ್ಚಾಗಿದ್ದು, ವಿದ್ಯುತ್ ಬಿಲ್ ಅನ್ನು ಆನ್‌ಲೈನ್‌ನಲ್ಲಿ ಕಟ್ಟುವ ಹಾಗಿದ್ದರೆ ಬೆಸ್ಕಾಂ ಅಧಿಕಾರಿಗಳನ್ನು ಸಂಪರ್ಕ ಮಾಡಿಯೇ ಕಟ್ಟಬೇಕಿದೆ. ಇಂಧನ ಇಲಾಖೆ ಇಂತಹ ಜಾಲದ ವಿರುದ್ಧ ಕ್ರಮಕ್ಕೆ ಮುಂದಾಗಬೇಕಿದೆ. 

Leave a comment

Your email address will not be published. Required fields are marked *