September 14, 2026
#ರಾಷ್ಟ್ರೀಯ

ರಾಜ್ಯದಲ್ಲಿ ವಿದ್ಯುತ್ ಅಭಾವಕ್ಕೆ ಬಿಜೆಪಿ ಕಾರಣ

ನವದೆಹಲಿ: ರಾಜ್ಯದಲ್ಲಿ ಸೃಷ್ಠಿಯಾಗಿರುವ ವಿದ್ಯುತ್ ಅಭಾವಕ್ಕೆ ಬಿಜೆಪಿ ಕಾರಣ, ತಮ್ಮ ನಾಲ್ಕು ವರ್ಷದ ಅವಧಿಯಲ್ಲಿ ವಿದ್ಯುತ್ ಸಂಗ್ರಹಕ್ಕೆ ಯಾವುದೇ ಪ್ರಯತ್ನ ಮಾಡದೇ ನಿದ್ದೆ ಮಾಡಿ ಈಗ ನಮ್ಮ ಮೇಲೆ ಆರೋಪ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಆರೋಪಿಸಿದ್ದಾರೆ.

https://imasdk.googleapis.com/js/core/bridge3.595.0_en.html#goog_2123173180

ನವದೆಹಲಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ಅಭಾವದಿಂದ ವಿದ್ಯುತ್ ಕೊರತೆಯಾಗಿದೆ, ಗಾಳಿಯೂ ಸರಿಯಾಗಿ ಬೀಸದೆ ವಿಂಡ್ ಎನರ್ಜಿ ಕೂಡಾ ಕಡಿಮೆಯಾಗಿದೆ. 16000 ಮೇಗಾ ವ್ಯಾಟ್‍ಗೆ ಬೇಡಿಕೆ ಇದೆ ಸದ್ಯ ರಾಜ್ಯದಲ್ಲಿ 1500 ಮೇಗಾ ವ್ಯಾಟ್ ಕೊರತೆಯಾಗಿದೆ ಬೇರೆ ರಾಜ್ಯಗಳ ಜೊತೆಗೆ ಮಾತಾಡಿ ವಿದ್ಯುತ್ ಖರೀದಿ ಮಾಡುತ್ತಿದೆ, ಗಿಡ್ ಯಿಂದಲೂ ವಿದ್ಯುತ್ ಖರೀದಿ ಮಾಡುತ್ತಿದೆ. ಕೊರತೆ ನೀಗಿಸಲು ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದರು.

ಕೆಲ ಸರ್ಕಾರಿ ಭೂಮಿಗಳಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸಲು ನಿರ್ಧರಿಸಿದೆ. ರೈತರಿಂದಲೂ ಭೂಮಿ ಪಡೆಯುವ ಪ್ರಯತ್ನ ನಡೆಯುತ್ತಿದೆ. ಸಕ್ಕರೆ ಕಾರ್ಖಾನೆಗಳ ಬಯೋ ಗ್ಯಾಸ್ ನಿಂದ ವಿದ್ಯುತ್ ಬರುತ್ತೆ ಅದನ್ನು ಬಳಕೆ ಮಾಡಲಿದ್ದೇವೆ. ಈ ಬಗ್ಗೆ ಸಿಎಂ ಜೊತೆಗೆ ಚರ್ಚೆ ಮಾಲಿದ್ದೇವೆ. ಕಳೆದ ನಾಲ್ಕು ವರ್ಷದಲ್ಲಿ ಏನು ಮಾಡದ ಬಿಜೆಪಿ ನಾಯಕರು ರಾಜ್ಯಕ್ಕಿದ್ದ ವಿದ್ಯುತ್ ಹಂಚಿಕೆಯನ್ನು ವಾಪಸ್ ಬಿಟ್ಟುಕೊಟ್ಟಿದೆ ನಮ್ಮ ವಿದ್ಯುತ್ ಪಾಲನ್ನು ಈಗ ಬೇರೆ ರಾಜ್ಯಗಳು ಬಳಕೆ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು. 

ಜಾರ್ಜ್ ಕಾಣೆಯಾಗಿದ್ದಾರೆ ಎಂದ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಅವರು ಜಾರ್ಜ್ ಎಲ್ಲೂ ಕಾಣೆಯಾಗಿಲ್ಲ, ದೆಹಲಿಯಲ್ಲಿ ಕೇಂದ್ರ ಇಂಧನ ಸಚಿವರನ್ನು ಭೇಟಿ ಮಾಡಿ ಹೆಚ್ಚಿನ ವಿದ್ಯುತ್ ನೀಡಲು ಮನವಿ ಮಾಡಿದೆ, ಸಮಸ್ಯೆ ಬಗೆಹರಿಸಲು ದೆಹಲಿಗೆ ಬರದೆ ನಾನು ಬಿಜೆಪಿ ಕಚೇರಿಯಲ್ಲಿ ಕೂರಬೇಕಾ ಅಥಾವ ಬೊಮ್ಮಾಯಿ ಮನೆಯಲ್ಲಿ ಕೂರಬೇಕಾ? ದೆಹಲಿಯಲ್ಲಿ ವಿದ್ಯುತ್ ಹೆಚ್ಚಳ ಮಾಡುವ ಬಗ್ಗೆ ಚರ್ಚೆ ಮಾಡುತ್ತಿದೆ ಎಲ್ಲ ಪೊಟೊ ಸಹಿತ ಮಾಹಿತಿ ಹಂಚಿಕೊಂಡಿದೆ, ಬಿಜೆಪಿ ನಾಯಕನರು ಜನರಿಂದ ತಿರಸ್ಕೃತಗೊಂಡ ಹತಾಶೆಯಲ್ಲಿ ಮಾತನಾಡುತ್ತಿದ್ದಾರೆ.

ನಮ್ಮ ಸರ್ಕಾರ ಬಂದು ಈಗ ಮೂರು ತಿಂಗಳಾಗಿದೆ, ಸಮಸ್ಯೆ ಪರಿಪರಿಸಲು ಸಮಯಬೇಕಾಗುತ್ತೆ, ಬಿಜೆಪಿ ವೈಫಲ್ಯದಿಂದ ಈ ಎಲ್ಲ ಸಮಸ್ಯೆ ಬಂದಿದೆ, ರೈತರು ಪ್ರತಿಭಟನೆ ಮಾಡುವುದಾದರೇ ಬಿಜೆಪಿ ಕಚೇರಿ ಮುಂದೆ ಮಾಡಲಿ, ಸರ್ಕಾರದ ವಿರುದ್ಧ ಅಲ್ಲ ಎಂದು ತಿರುಗೇಟು ನೀಡಿದರು.

Leave a comment

Your email address will not be published. Required fields are marked *